
ದೀಪಾವಳೀ ಹಬ್ಬದ ಶುಭಾಶಯಗಳು
ದೀಪ ಹಚ್ಚಿ ಹೊರಗಿನ ಕತ್ತಲೆಯನ್ನು ದೂರ ಮಾಡುವ ಪ್ರಯತ್ನ ಮಾಡುತ್ತೇವೆ.ಮನುಷ್ಯನಿಗೆ
ಕತ್ತಲೆ ಇಡಿಸುವುದಿಲ್ಲ,ಸದಾ ಬೆಳಕಿನೊಂದಿಗೆ ಜೀವನ ಸಾಗಿಸಲು ಇಚ್ಚಿಸುತ್ತಾನೆ.ಜೀವನದ
ಅಮೂಲ್ಯ ವಸ್ತುಗಳನ್ನು ಹುಡುಕಲು ಬೆಳಕು ಬೇಕು.ಹಾಗೆಯೇ ನಮ್ಮ ಮನಸ್ಸಿನಲ್ಲಿ ಇರುವ
ಮೌಡ್ಯ ರೂಪದ ಕತ್ತಲೆಯನ್ನು ದೂರ ಮಾಡಲು ಮನುಷ್ಯ ಜ್ಞಾನದ ಆಸರೆಯನ್ನು ಬಯಸುತ್ತಾನೆ.ಆ
ಜ್ಞಾನವು ಶಾಸ್ತ್ರಗಳಲ್ಲಿ ಇರಬಹುದು,ಅಥವಾ ಒಬ್ಬ ಉತ್ತಮ ಗುರುಗಳ ಬಳಿ
ಸಿಗಬಹುದು.
ಪ್ರಪಂಚದಲ್ಲಿ ಪರಿಪೂರ್ಣ ಮನುಷ್ಯನಿಲ್ಲ.ಹಾಗೇನಾದರು ಇದ್ದರೇ ಆತ ಮನುಷ್ಯನೇ ಅಲ್ಲಾ,”ದೇವರು”ಇರಬಹುದು.ಏಕೆಂದರೆ ಏನನ್ನಾದರು(ನೆಮ್ಮದಿ,ಶಾಂತಿ,ಅಥವಾ ಮುಕ್ತಿ ಇತ್ಯಾದಿ)ನಾವು ಹುಡುಕುತ್ತಾ ಇದ್ದೇವೆ ಅಂದರೆ ನಮ್ಮಲ್ಲಿ ಇನ್ನೂ “ಬೇಕು”ಗಳು ಇದ್ದಾವೆ,ಅವುಗಳ ಪೂರ್ತಿಗಾಗೆ ಈ ಭುವಿಯಲ್ಲೇ ಇದ್ದೇವೆ,ಅವುಗಳ ಪೂರ್ಣತೆಯಾದಗಲೇ ನಾವು “ಪರಿಪೂರ್ಣ”ರು(ದೇವರು).ಪರಿಶ್ರಮ(ಪುರುಷಾರ್ಥ)ವಿಲ್ಲದೆ ಪರಿಪೂರ್ಣತೆಯಿಲ್ಲ.
ಪರಿಪೂರ್ಣತೆ ಹೊಂದಲು ಮನದಲ್ಲಿ ಜ್ಞಾನ ಜ್ಯೋತಿಯನ್ನು ಬೆಳೆಗಿಸಬೇಕು.ಆಗಲೇ ನಮ್ಮ ಮೌಡ್ಯತೆಗಳನ್ನು ದೂರಮಾಡಲು ಸಾಧ್ಯವಿದೆ.ಇದು ದೂರವಾದಮೇಲೆ “ಬೇಕು”ಗಳಿಗೆ ಅಂತ್ಯ ಗೀತೆ.ಆಗಲೇ ನಿಜವಾದ ದೀಪಾವಳಿ ಆಗುವುದು.ಸದಾ ಆನಂದಮಯ,ಸುಖಮಯ ಜೀವನ ನಮ್ಮದಾಗುವುದು.
ನಿತ್ಯ ಜ್ಯೋತಿರ್ಮಯ ಜೀವನ ನಮ್ಮದಾಗಲಿ.
ದೀಪವ ಬೆಳಗಿಸಿ,
ಕತ್ತಲೆ ಓಡಿಸಿ |
ಜ್ಞಾನವ ಬೆಳಸಿ,
ಮೌಡ್ಯವ ಅಳಿಸಿ ||
ಮತ್ತೊಮ್ಮೆ ದೀಪಾವಳೀ ಹಬ್ಬದ
ಶುಭಾಶಯಗಳು
