1
ಮುಸ್ಸಂಜೆ ಜಾರಿತು ಸೂರ್ಯನೊಂದಿಗೆ,
ಚಂದಮಾಮ ಬಂದ ತಿಂಗಳ ಬೆಳಕಿನೊಂದಿಗೆ.
ಮೈ ಮನ ಜಾರುತಿದೆ ಸಿಹಿನಿದ್ರೆಗೆ,
ಬಾರದಿರಲಿ ವಿಘ್ನಗಳು ನಿಮ್ಮ ಕನಸಿಗೆ.
2.
ಮನಸು ಮೃದುವಾಗಿರಲಿ,
ಮಾತು ಹಿತವಾಗಿರಲಿ,
ನಡೆಯಲಿ ಸರಳತೆ ಇರಲಿ,
ಜೀವನ ಹಸನಾಗಿರಲಿ.
3.
ಸ್ನೇಹ ಸಂಕೋಲೆ ಕಳಚದಿರಲಿ ,
ನಂಬಿಕೆಗೆ ಮೊಸವಾಗದಿರಲಿ,
ಮನೆ ಮನಸುಗಳ ಸಂಬಂಧ,
ಬಹು ಜನುಮಗಳ ರುಣಾನುಬಂದ.
4.
ರಾತ್ರಿಯ ನೀರವತೆ ಕಳೆದಿದೆ,
ದಿನಕರನ ಬೆಳಕು ಮೂಡಿದೆ ,
ಬದಕು ಬೆಳಗೋ ಸ್ಪೂರ್ತಿಸಿಗಲಿ,
ಸಾಧನೆಯ ಮಾರ್ಗ ಸುಗಮವಾಗಲಿ.
5
ಚುಮು ಚುಮು ಛಳಿಯಲಿ ಜಾಡ್ಯವ ಓಡಿಸಿರಿ.
ಮನವ ತೊಳೆಯಲು ದೇವರ ನಾಮವ ಧ್ಯಾನಿಸಿರಿ.
ಬದುಕಲಿ ಸ್ಪೂರ್ತಿಯ ಸೆಲೆ ಮೂಡಲೀ
ಮನೆ ಮನಸ್ಸುಗಳು ನೆಮ್ಮದಿ ಹೊಂದಲಿ.
6
ಇರುಳು ಮರಳಿ ಕಳೆದಿದೆ,
ಹಗಲು ಮತ್ತೆ ಬಂದಿದೆ,
ಹೊಸ ಬೆಳಕು ಚೆಲ್ಲಿದೆ ಜಗತ್ತಿಗೆ
ಸ್ಪೂರ್ತಿಯಾಗಲಿ ನಿಮ್ಮ ಬಾಳಿಗೆ.
—-
ವಿಶೇಷ ಸೂಚನೆ:-
ಇವೆಲ್ಲಾ ಕವಿತೆಗಳಲ್ಲಾ,ಸು(ಮನಸ್ಸಿನಿಂದ)ಮ್ಮನೆ ಬರೆದಿದ್ದು,ಅಲ್ಲಾ ಗೀಚಿದ್ದು.ಇವೆಲ್ಲಾ ಏಕಾಂಗಿ ಪಯಣದಲ್ಲಿ ಬರೆದ
ಭಾವ(ಅಭವ್ಯ)ಗೀತೆಗಳು.ಸುಮ್ಮನೆ ಓದಬೇಕು ಅಷ್ಟೇ ,ಅರ್ಥ ಹುಡ್ಕ ಬೇಡಿ.
ಧನ್ಯವಾದಗಳು.


very nice poem swamiji