ಸ್ಫೂರ್ತಿ…
ಪ್ರಯತ್ನ ಪಡದೆ ಯಾವುದನ್ನು ಪ್ರಾಪ್ತಿ ಹೊಂದಲು ಸಾದ್ಯವಿಲ್ಲ .
ಈ ವಾಕ್ಯವನ್ನು ಬರೆದು ತುಂಬಾ ದಿನಗಳಾದರೂ ಯಾವುದೇ ರೀತಿಯ ಒಂದು ಉದಾಹರಣೆ ನನಗೆ ಕೊಡಲು ಸಾಧ್ಯವಾಗಿರಲಿಲ್ಲ .ಆದ್ರೆ ನಾ ಇವತ್ತು ದಟ್ಸ್ ಕನ್ನಡ.ಕಾಂನಲ್ಲಿ ಮಣಿಕಾಂತರು “ಕೈ ಇಲ್ಲ, ಕಾಲಿಲ್ಲ, ಚಿಂತೆನೂ ಇಲ್ಲ”ಎಂಬಾ
ನಿಕ್ ಜಿಸಿಕ ನ ಬಗ್ಗೆ ಬರೆದ ಲೇಖನವನ್ನು ಓದಿ ಮುಗಿಸಿದ ನಂತರ ಕಣ್ಣಂಚಲಿ ಹನಿ ಜಿನಿಗಿತು.ಹಾಗೆ ಜೊತೆಗೆ ಸಾಧನೆಗೆ ಕೈ -ಕಾಲುಗಳ ಪಾಲು ಎಷ್ಟೆಂಬುದು ತಿಳಿಯಿತು .ಮನಸ್ಸಿದರೆ ಮಾರ್ಗ ,ಆನ್ನೋ ನಾಣ್ಣುಡಿ ಎಷ್ಟು ಸಾರ್ಥಕ ಆಲ್ವಾ ?
ಜೀವನದಲ್ಲಿ ಸಾಧಿಸುವ ಛಲವಿದ್ದರೆ ಬೆಟ್ಟವನ್ನು ಕರಗಿಸಬಹುದು.ಹುಟ್ಟಿಂದ ಕೈ-ಕಾಲುಗಳ ಪರಿಚಯವಿಲ್ಲದೆ ಬೆಳೆದ ನಿಕ್ ಜೆಸಿಕ್ ಬೆಳೆದ ರೀತಿ ವಿಸ್ಮಯ ..
ಪ್ರಪಂಚದಲ್ಲಿ ಕೈ-ಕಾಲುಗಳು ಚೆನ್ನಾಗಿ ಇದ್ದೂ ಸಹ ದುಡಿಯದೆ ಅಥವಾ ಸಾಧಿಸುವ ಪ್ರಯತ್ನ ಪಡದೆ ಕೊರಗುವರು ,ಕೂಗಾಡುವವರ ಸಂಖ್ಯೆಗೇನೂಕಡಿಮೆ ಇಲ್ಲಾ ಬದುಕುವ ಆಸೆ ಜೊತೆಗೆ ಸಾಧಿಸೋ ಛಲ ಇದ್ದರೆ ,ನಾವು ತಲುಪ ಬೇಕು ಎಂದಿರುವ ಗುರೀ ದೂರವಿರದು.
ಮನಸ್ಸಿನ ಕೈಗೆ ಬುದ್ದಿ ಕೊಡದೆ,ಬುದ್ದಿಯಾ(ವಿವೇಕ)ಕೈಯಲ್ಲಿ ಅದನ್ನು ನಿಯಂತ್ರಿಸಿದರೆ ಅರ್ಧ ದಾರೀ ಸುಗಮ.ಮನುಷ್ಯನನ್ನು
ಶರೀರದ (ಅಂಗ)ವಿಕಲತೆಗಿಂತಾ ,ಮಾನಸಿಕ ವಿಕಲತೆ ಹೆಚ್ಚು ಕಾಡುತ್ತದೆ .ಏಕೆಂದರೆ ಅಂಗಾಂಗಗಳಿಗೆ ಕೆಲಸವನ್ನು ಸೂಚಿಸುವುದೇ ಮನಸು .ಆಗ ಅವು ಕಾರ್ಯ ನಿರ್ವಹಿಸುತ್ತವೆ .ಆದ್ರೆ ಎಲ್ಲ ನಿಯಂತ್ರಣ ಮಾತ್ರ ಮನಸ್ಸಿನ ಕೈಯಲ್ಲಿ ಇರುತ್ತದೆ .ಈ ಮನಸ್ಸನ್ನು ನಿಯಂತ್ರಿಸುವುದು ನಮ್ಮ ವಿವೇಕ.ಯಾವುದನ್ನು ಮಾಡಬೇಕು ,ಏನನು ಮಾಡ ಬಾರದು ಎಂದು ಸದಾ ಜಾಗೃತೆ ಮೂಡಿಸೋದು ವಿವೇಕ.
ಮನಸ್ಸನ್ನು ಶುದ್ಧವಾಗಿ ಸದಾ . ಇದರ ಬಗ್ಗೆ ಮುಂದೆ ಬರೆಯುತ್ತೇನೆ ..
ನಿಕ ಜಿಸಿಕ್ ಬಗ್ಗೆ ಓದ ಬೇಕಾದ್ರೆ ಕ್ಲಿಕ್ ಮಾಡಿ —
http://thatskannada.oneindia.in/column/manikanth/2008/0904-nick-vujicic-no-limbs-no-legs-no-worries.html

good artical,nice keep it up.i imprees…
hats off