ಕೀರ್ತಿ ಶಿಖರದ ಕಳಸಕೆ ಅರವತ್ತು ವಸಂತಗಳು.
October 29, 2009
ಪೂಜ್ಯ ಕರ್ಮಯೋಗಿ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಮಹಾ ಸ್ವಾಮೀಜಿ.
ಶ್ರೀ ಜೈನ ಮಠ
ಶ್ರೀಕ್ಷೇತ್ರ ಶ್ರವಣಬೆಳಗೊಳ
ದೀಪಾವಳಿ ಮತ್ತೊಮ್ಮೆ ಬಂದಿದೆ…
October 6, 2009
ದೀಪಾವಳಿ ಮತ್ತೊಮ್ಮೆ ಬಂದಿದೆ ಮನದ ಕತ್ತಲೆಯ ಕಳೆಯಲು.ಎಲ್ಲೆಲ್ಲೂ ಸಡಗರ ಸಂಭ್ರಮದ ವಾತವರಣ.
ಕಳೆದೊಂದು ವರ್ಷದಲ್ಲಿ ಏನೆಲ್ಲಾ ಬದಲಾವಣೆ ಕಂಡಿದ್ದೇವೆ ಪ್ರಪಂಚದಲ್ಲಿ ನಾವುಗಳುಅದನ್ನು ಗಮನಿಸಿದಾಗ ನಾವುಗಳು ಎಲ್ಲಿದ್ದೆವೋ ಅಲ್ಲೇ ಇದ್ದೇವೆ ಅನಿಸೋ ಭಾವನೆ ಇದೆ.
ಮಾನವನ ಸಾಧನೆಗಳ ಪಟ್ಟಿಯಲ್ಲಿ ಇನ್ನು ಬಹಳಷ್ಟು ಬಾಕಿಯಿವೆ.ವಿಪರೀತ ಅರ್ಥಿಕ ಹಿನ್ನೆಡೆ ಎಲ್ಲರನ್ನು ಕಾಡಿಸುತ್ತಿದೆ.ಮನೆಯ ಒಳಗೂ ಹೊರಗೂ ಆತಂಕದ ಛಾಯೆ ಕಾಡುತ್ತಿದೆ.ಎಲ್ಲೆಲ್ಲೂ ಭಯದ ವಾತವರಣ,ಬದುಕಿದೆಯ ಬಡ ಜೀವವೇ ಅನ್ನೋರೀತಿಯಲ್ಲಿ ಜನ ಬದುಕು ನಡೆಸುತ್ತಿದ್ದಾರೆ.
ಮನುಷ್ಯನಿಗೆ ಧಾರ್ಮಿಕ ಅನ್ನೋ ಪದವಿ ಕಳಚಿದೆ.ಸಂಸ್ಕೃತಿಯನ್ನು,ಆಚರಣೆಗಳನ್ನು ಮರೆಯುವಷ್ಟು ಪರಿಸ್ತಿತಿ ನಿರ್ಮಾಣವಾಗಿದೆ.ನಾನು ನನ್ನ ಸಂಸಾರ ಅನ್ನೋ ಕಲ್ಪನೆ ಆವರಿಸಿ ಸಮಾಜ ಮುಖಿಯಾಗಿ ಇರುವ ಬಯಕೆ ದೂರವಾಗಿದೆ.ಪರಿಸ್ತಿತಿ ಮನುಷ್ಯನ ಜಂಜಾಟಗಳನ್ನು ಹೆಚ್ಚಿಸಿದೆ.ತನ್ನವರ ಜೊತೆ ನಂಬಿಕೆ ರಹಿತನಾಗಿ ಏಕಾಂಗಿ ಅತಂತ್ರನಾಗಿಸಿದೆ.
ಹಬ್ಬಗಳು ಮನುಷ್ಯನ ಮನಸ್ಸನ್ನು ಉಲ್ಲಾಸಗೊಳಿಸೋ ಸಾಧನಗಳು.ಎಲ್ಲರೋ ಸೇರಿ ಚಿಂತೆಗಳ ಮರೆತು,ಚಿಂತನೆ ಮಾಡೋ ಅಮೂಲ್ಯ ಕ್ಷಣ.


Posted by dksj
Posted by dksj
Posted by dksj 